*ಚತುರ್ದಶಿ ದಿನ:- ಆರಾಟ*
ಈ ದಿನ ಬೆಳಿಗ್ಗೆ ಶ್ರೀ ದೇವರ ಉಷಾ ಕಾಲಪೂಜೆ, ಸಹಸ್ರನಾಮ ಅಭಿಷೇಕ.ವಿಶೇಷ ಹರಿವಾಣ ನೈವೇದ್ಯ ಸಮರ್ಪಿಸಿ 11.30'ಕ್ಕೆ ಮಹಾಪೂಜೆ. ಅನಂತ ದೇವರ ಬಳಿ ಹೊರಟು ಉತ್ಸವ, ಸಣ್ಣ ರಥೋತ್ಸವ, ವಸಂತ ಪೂಜೆಯಾಗಿ ಪಾಲಕಿ ಬಲಿಯಾಗಿ ಶ್ರೀ ದೇವರು ಗರ್ಭಗುಡಿಯಲ್ಲಿ ವಿರಾಜಮಾನರಾಗುತ್ತಾರೆ.
ಸಂಜೆ 7'ಕ್ಕೆ ಸರಿಯಾಗಿ ಅನಂತ ದೇವರ ಬಲಿ ಹೊರಟು ಸವಾರಿ ಬಲಿ, ಕಟ್ಟೆಪೂಜೆಯು ನಡೆದು ನಂತರ ಭದ್ರಾ ಸರಸ್ವತಿ ಸರೋವರದಲ್ಲಿ ಶ್ರೀ ದೇವರಿಗೆ ಅವಭೃತ ಸ್ನಾನ. ಜಳಕದ ಕೆರೆಯಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆದು ಗರಿಕೆ ಮುಖೇನ ಎಳ್ಳೆಣ್ಣೆ, ಕಡಲೆ ಪುಡಿ, ಅರಶಿನವನ್ನು ಲೇಪಿಸಿ ನಂತರ ಸರೋವರದಲ್ಲಿ ದೇವರೊಂದಿಗೆ ಮಂಗಳಸ್ನಾನ ಗೈಯ್ಯುವ ಭಕಾದಿಗಳಿಗೆ ಸೌಭಾಗ್ಯವೇ ಸರಿ. ನಂತರ ಸಂಪ್ರದಾಯದಂತೆ ಶ್ರೀ ದೇವರು ಬಂದುಧ್ವಜ.ಸ್ತಂಭದ ಬಳಿ ಬಂದು ಧ್ವಜಾವರೋಹಣ.
ನಂತರ ಮಹಾಪೂಜೆಯಾಗಿ ಪದ್ಮನಾಭ ದೇವರಬಲಿ ಹೊರಟು ಉತ್ಸವ, ರಥೋತ್ಸವ, ಪಾಲಕಿ ಬಲಿ ಸೇವೆಯು ನಡೆದು ಶ್ರೀ ದೇವರು ಗರ್ಭಗುಡಿಯನ್ನು ಪ್ರವೇಶಗೈದು ಸಣ್ಣ ಕೂರ್ಮಾರತಿಯೊಂದಿಗೆ ವಾರ್ಷಿಕ ಉತ್ಸವ ಸುಸಂಪನ್ನಗೊಳ್ಳುತ್ತದೆ.
ವಿ.ಸೂ:- ಅನಾದಿ ಕಾಲದಿಂದಲೂ (ಜೋಡು ದೇವರ ಬಲಿ ಹೊರತುಪಡಿಸಿ) ಕ್ಷೇತ್ರದ ಪ್ರಾಂಗಣದಲ್ಲಿ ಎಲ್ಲಾ ಉತ್ಸವಾದಿಗಳು ನಡೆಯುವುದು ಪದ್ಮನಾಭ ದೇವರಿಗೆ ಮಾತ್ರ. ಪದ್ಮನಾಭ ದೇವರು ಕ್ಷೇತ್ರದ ಪ್ರಾಂಗಣ ಬಿಟ್ಟು ಹೊರಗೆ ಸೇವೆ ಸ್ವೀಕರಿಸುವಂತಿಲ್ಲ. ಷಷ್ಟಿ ಬ್ರಹ್ಮ ರಥೋತ್ಸವ, ಅವಭೃತ ಕಟ್ಟೆ ಪೂಜೆ ಸಹಿತ ಸವಾರಿ ಬಲಿಗಳು ಸೇವೆಗಳು ಅನಂತ ದೇವರಿಗೆ ನಡೆಯುವುದು ಕ್ಷೇತ್ರದ ಪೂರ್ವ ಪರಂಪರೆ.
ಹೀಗೆ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಸ್ವಾಮಿಯ ವಾರ್ಷಿಕ ಐದನೆಯ ದಿನ 'ಜಾರಂದಾಯ ಪರಿವಾರ ದೈವ'ಗಳ ದೊಂಪದ ಬಲಿ(ಚಪ್ಪರ ಬಲಿ)ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳುವುದರೊಂದಿಗೆ *'ಬ್ರಹ್ಮ ಕಲಶೋತ್ಸವ'*ಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತದೆ.
ಶ್ರೀ ಸ್ವಾಮಿಯು ಬೇಡಿದನ್ನು ನೀಡುವವನು. ವಿಶೇಷವಾಗಿ ಕ್ಷೇತ್ರದಲ್ಲಿ ಸಕಲ ಸರ್ಪದೋಷಗಳಿಗೂ ಪರಿಹಾರವಿದೆ. ಆತನಿಗೆ ಪ್ರಾರ್ಥನೆಗಿಂತ ಮಿಗಿಲಾದ ಸೇವೆಯಿಲ್ಲ. ನಂಬಿಕೆಗಿಂತ ಮಿಗಿಲಾದ ಭಕಿಯಿಲ್ಲ. ಜಾತಿ ಮತ ಭೇದವೆನ್ನದೆ ತನ್ನನ್ನು ನಂಬಿ ಬರುವ ಭಕ್ತರಿಗೆ ಸಕಲ ಸನ್ಮಂಗಳವನ್ನು ಕರುಣೆಸುವ ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ಮುಂದಿನ ಫೆಬ್ರವರಿ ತಿಂಗಳು ನಡೆಯುವ ಬ್ರಹ್ಮ ಕಲಶೋತ್ಸವದ ಮೂಲಕ ಸಂಪೂರ್ಣ ಜೀರ್ಣೋದ್ಧಾರಗೊಂಡ ಶಿಲಾಮಯ ಕ್ಷೇತ್ರದ ಅಧಿಪತಿಯಾಗಿ ಗರ್ಭಗುಡಿಯಲ್ಲಿ ವಿರಾಜಮಾನನಾಗುವ ಪರ್ವಕಾಲ ಎದಿರುಗೊಂಡಿದೆ.
ನಮ್ಮ ಹಿಂದಿನವರಿಗೆ ಈ ಪರ್ವಕಾಲವನ್ನು ನೋಡಲು ಸಿಗಲಿಲ್ಲ. ಮುಂದಿನವರಿಗೆ ಈ ಪಣ್ಯಕಾಲ ಒದಗುವುದೋ ಎಂಬುದು ದೈವೇಚ್ಛೆ.ಆದರೆ ನಮಗೆ ಪೂರ್ವ ಜನ್ಮದ ಸುಕೃತ ಫಲವೋ ಎಂಬಂತೆ 'ಶ್ರೀ ದೇವರಿಗೆ ನಡೆಯುವ ಬ್ರಹ್ಮ ಕಲಶ ಪುಣ್ಯೋತ್ಸವದ ಕಾರ್ಯಕ್ರಮದಲ್ಲಿ ಸೌಭಾಗ್ಯವನ್ನು ಕರುಣಿಸಿದ್ದಾನೆ. ಬನ್ನಿ ನಾವು ಮಾಡುತ್ತೇವೆ ಎಂಬದಕ್ಕಿಂತಲೂ ಭಗವಂತ ನಮ್ಮೊಳಗಿದ್ದು ಎಲ್ಲಾ ಸತ್ಕಾರ್ಯಗಳನ್ನು ನಮ್ಮಿಂದ ಮಾಡಿಸಿಕ್ಕೊಳ್ಳುತ್ತಾನೆಂಬ ಅಚಲ ನಂಬಿಕೆಯನ್ನಿಟ್ಟು ತ್ರಿಕರಣ ಪೂರ್ವಕವಾಗಿ ಕೈಲಾದ ಅಳಿಲು ಸೇವೆಯನ್ನು ಶ್ರೀ ಸ್ವಾಮಿಯ ಪದತಲಗಳಲ್ಲಿ ಅರ್ಪಿಸಿ ಈ ಪುಣ್ಯೋತ್ಸವದ ಕಾರ್ಯದಲ್ಲಿ ಪಾಲ್ಗೊಂಡು ಜನ್ಮಜನ್ಮಾಂತರದ ಪಾಪಗಳನ್ನು ಕಳೆದು ಪುನೀತರಾಗೋಣ. ಶ್ರೀ ದೇವರ ದಯೆಯಿಂದ ಎಲ್ಲಾ ಸತ್ಕಾರ್ಯಗಳೂ ಸಾಂಗವಾಗಿ ನೆರವೇರಲಿ.ಎಲ್ಲರಿಗೂ ಮಂಗಳವಾಗಲಿ. ಲೋಕ ಕಲ್ಯಾಣಕ್ಕೆ ನಾಂದಿ ಹಾಡಲಿ.
*'||ಭದ್ರಂ ಶಿವಂ ಸುಂದರಂ||'*
Comments
Post a Comment