*ಪ್ರಥಮ ದಿನ:- ಚತುರ್ದಶಿ*
ಈ ದಿನ ಸಂಜೆ 7'ಕ್ಕೆ ಪ್ರಾರ್ಥನೆ ನೆರವೇರಿಸಿ ಸದ್ಭಕ್ತರೊಡಗೂಡಿಸಿ ಶ್ರೀ ದೇವರ ಸಮ್ಮುಖದಲ್ಲಿ ಗ್ರಾಮಕ್ಕೆ, ಭಕ್ತಾದಿಗಳಿಗೆ ಬರುವ ಸರ್ವ ಕಷ್ಟ-ನಷ್ಟ ಅರಿಷ್ಟಾದಿಗಳನ್ನು ದೂರೀಕರಿಸಿ ಬೇಡಿ ಬಂದ ಭಕ್ತರನ್ನು ಅನುಗ್ರಹಿಸಿ ನಾಲ್ಕು ದಿನಗಳಲ್ಲಿ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಲೋಪ ದೋಷಗಳು ಬರದ ರೀತಿಯಲ್ಲಿ ಸುಸೂತ್ರವಾಗಿ ನಡೆಸಿಕೊಟ್ಟು ಕ್ಷೇತ್ರದ ಕೀರ್ತಿ ಖ್ಯಾತಿಯನ್ನು ಬೆಳಗಿಸುವಂತೆ ಸಂಪ್ರಾರ್ಥಿಸುತ್ತಾರೆ.
ನಂತರ ಅನಂತ ದೇವರ ಬಳಿ ಹೊರಟು ಧ್ವಜ ಸ್ತಂಭದ ಬಳಿ ಬಂದು ಧ್ವಜಾರೋಹಣ. ಧ್ವಜ ಸ್ತಂಭವನ್ನು ಫಲ ಪುಷ್ಪಗಳಿಂದ ಅಲಂಕರಿಸಿ ಗರುಡ ಪೂಜೆ ನಡೆಯುತ್ತದೆ. ನಂತರ ಜೋಡು ದೇವರ ಬಯನ ಬಲಿ ಉತ್ಸವ. ನಂತರ ನಿತ್ಯ ಮಹಾಪೂಜೆಯಾಗಿ, ನಿತ್ಯ ಬಲಿ, ಭೂತ ಬಲಿ. ಹೀಗೆ ಒಂದಾದ ಒಂದರಂತೆ ನಾಲ್ಕು ಬಾರಿ ಗರ್ಭಗುಡಿಯಿಂದ ಹೊರಬಂದು ಕೊನೆಗೆ ಮಂದಸ್ಮಿತ ಸಾಲು ಸಾಲು ದೀಪಗಳ ಬೆಳಕಿನಲ್ಲಿ ನಡೆಯುವ ದೀಪ ಬಲಿಯ ಸೊಬಗನ್ನು ನೋಡಲು ಕಣ್ಗಳಿಗೆ ಹಬ್ಬವೇ ಸರಿ.
Comments
Post a Comment