*ದ್ವಿತೀಯ ದಿನ:- ಹುಣ್ಣಿಮೆ*

ಮಾನಸ ಪೂಜೆ. ಈ ದಿನ ಅಣ್ಣ ತಮ್ಮಂದಿರಾದ ಶ್ರೀ ಅನಂತ ಪದ್ಮನಾಭ ದೇವರುಗಳು ತಂತ್ರ ಮುಖೇನ ಬಲಿ ಹೊರಟು ಜೋಡು ದೇವರ ಉತ್ಸವ. ಕಟ್ಟೆ ಪೂಜೆ, ಕೆರೆ ಉತ್ಸವ. ಪಾಲಕಿ ಬಲಿಯಾಗಿ ಮಾನಸ ಪೂಜೆಯಾಗಿ ಕವಾಟ ಬಂಧನ. ಮರುದಿನ ಬೆಳಿಗ್ಗೆ ತಂತ್ರಿಗಳಿಂದ ಕವಾಟೋದ್ಘಾಟನೆ.(ತುಳುವರ ಪ್ರಕಾರ ಗುಂಡದ ಬಾಕಿಲ್ ಜಪ್ಪುನಿ)
ದ.ಕ ಜಿಲ್ಲೆಯ ಹೆಚ್ಚಿನ ದೇವಾಲಯಗಳಲ್ಲಿ ಬ್ರಹ್ಮ ರಥೋತ್ಸವವು ನಡೆದು ಶಯನ ಪೂಜೆ ನಡೆಸಿ ಕವಾಟ ಬಂಧನ. ಮರುದಿನ ಅಭಿಷೇಕ ಪೂಜೆ ನಡೆದು ಕವಾಟೋದ್ಘಾಟನೆ. ಇಲ್ಲಿ ಮಾತ್ರ ಶ್ರೀ ಸ್ವಾಮಿಗೆ ವಿಶೇಷ ಮಡಿಯಲ್ಲಿ ಮಾನಸ ಪೂಜೆಯು ನಡೆದು, ಮರುದಿನ 
ಪಂಚಗವ್ಯ ಪ್ರೋಕ್ಷಣೆಯೊಂದಿಗೆ ಕವಾಟೋದ್ಘಾಟನೆ ನೆರವೇರುತ್ತದೆ.

Comments

Popular posts from this blog

Brahma Kalasha