*ಮಾನಸ ಪೂಜೆ*(ಶ್ವೇತ ಬಣ್ಣ-ವಿಶಾಲವಾದ)
ಶ್ರೀ ಮಹಾವಿಷ್ಣು ಅಲಂಕಾರ ಪ್ರಿಯ. ಪಂಚಭೂತಗಳಲ್ಲಿ ಮಹಾವಿಷ್ಣು ಆಕಾಶಕ್ಕೆ ಅಧಿಪತಿಯಾದ ಶ್ರೀ ಹರಿಗೆ ಶಬ್ದಗಳಿಂದ ಸ್ತುತಿಸುತ್ತಾ ಪೂಜೆ.
ಮೇಲಿನ ಹೆಸರೇ ಸೂಚಿಸುವಂತೆ ವಿಶಾಲವಾದ ಬಾನಿನಲ್ಲಿ ಅರಳಿದ ಪೂರ್ಣ ಚಂದಿರನ ಹುಣ್ಣಿಮೆ. ಸ್ಪರ್ಶಗೊಂಡ ಹುಣ್ಣಿಮೆಯ ರಾತ್ರಿಯಲ್ಲಿ ಸ್ವಾಮಿಗೆ ವಿಶೇಷ ಅಲಂಕಾರವನ್ನು ನೆರವೇರಿಸಿ ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ, ವೇದ ಮಂತ್ರಘೋಷಗಳೊಂದಿಗೆ ಶ್ರೀ ದೇವರುಗಳನ್ನು ಗರ್ಭಗುಡಿಯಲ್ಲಿ ಪವಡಿಸುವ ಪರ್ವಕಾಲವೇ ಮಾನಸ ಪೂಜೆ.
*ತೃತೀಯ ದಿನ:- ಭೂತ ಬಲಿ*
ಈ ದಿನದ ಸೇವೆಯನ್ನು ಶ್ರೀ ಸ್ವಾಮಿಗೆ ಗೌಪ್ಯವಾಗಿ ನಡೆಸಿ ಅರ್ಪಿಸಲಾಗುತ್ತದೆ. ಭೂತ ಬಲಿ ಸೇವೆಯಲ್ಲಿ ಭಕ್ತಾದಿಗಳಿಗೆ ಪಾಲ್ಗೊಳ್ಳುವಿಕೆ ನಿಷಿದ್ಧ.
Comments
Post a Comment